ಕುಂಭಕರ್ಣನ ಮರಣ

Print Friendly, PDF & Email
 ಕುಂಭಕರ್ಣನ ಮರಣ

Kumbakarna's Death

ಘೋರವಾದ ಯುದ್ಧವು ಆರು ದಿನಗಳ ಕಾಲ ನಡೆಯಿತು. ಅನೇಕ ರಾಕ್ಷಸರು ನಾಶ ಹೊಂದಿದರು. ರಾವಣನು ಸೋಲನ್ನು ಒಪ್ಪಿಕೊಳ್ಳಲು ಭಯಭೀತನಾಗಿದ್ದನು. ರಾವಣನು ತನ್ನ ಸಹೋದರ ಕುಂಭಕರ್ಣನ ಸಹಾಯವನ್ನು ಕೇಳಿದನು. ಆಗ ಕುಂಭಕರ್ಣನು, ‘ನೀನು ಬೇರೆಯವರ ಪತ್ನಿಯನ್ನು ಅಪಹರಣ ಮಾಡಿದ್ದೀಯ, ಕಾರಣ ನೀನು ರಾಮನಲ್ಲಿ ಕ್ಷಮೆಯನ್ನು ಕೇಳು’ ಎಂದನು. ಆಗ ರಾವಣನು ಅವನ ಮಾತನ್ನು ತಿರಸ್ಕರಿಸಿದನು. ಕೊನೆಗೆ ಕುಂಭಕರ್ಣನು ರಾವಣನಿಗೆ ಸಹಾಯ ಮಾಡಲು ಯುದ್ಧಭೂಮಿಗೆ ಇಳಿದನು. ಸುಗ್ರೀವನನ್ನು ತನ್ನ ತೋಳುಗಳಲ್ಲಿ ಹಿಸುಕಿ, ಯುದ್ಧಭೂಮಿಯಿಂದ ಹೊರಗೆ ಎಳೆದು ತಂದನು. ವಾನರ ಸೈನ್ಯವನ್ನು ನಾಶಮಾಡಿದನು. ಸುಗ್ರೀವನು ಕುಂಭಕರ್ಣನ ಹಿಡಿತದಿಂದ ಪಾರಾಗಿ ಪುನಃ ದಾಳಿಯನ್ನು ಪ್ರಾರಂಭಿಸಿದನು. ಇದರಿಂದ ವಾನರರು ಹೆದರಿ ಅನೇಕ ವಾನರರು ತಮ್ಮ ಜೀವನವನ್ನು ಕಳೆದುಕೊಂಡರು. ಆಗ ರಾಮನು, ‘ಈಗ ಸರಿಯಾದ ಸಮಯ ಬಂದಿದೆ ಅಕ್ಷಯ ಬಾಣಗಳ ಕೋಶವನ್ನು ತೆಗೆದುಕೊಂಡು ಬಾ’ ಎಂದು ಲಕ್ಷ್ಮಣನಿಗೆ ಹೇಳಿದನು. ರಾಮನು ಯುದ್ಧ ಭೂಮಿಗೆ ಬಂದು ಕೋದಂಡ ಬಿಲ್ಲಿನಿಂದ ನಿರಂತರ ಕುಂಭಕರ್ಣನ ಮೇಲೆ ದಾಳಿ ಮಾಡಿದನು. ಆಗ ಅನೇಕ ರಾಕ್ಷಸರು ಓಡಿಹೋದರು. ಕುಂಭಕರ್ಣನು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದನು. ಕೊನೆಗೆ ರಾಮನಿಂದ ಕುಂಭಕರ್ಣನ ಕೊನೆಯಾಯಿತು. ಕುಂಭಕರ್ಣನ ದೇಹದಿಂದ ಒಂದು ಜ್ಯೋತಿ ಹುಟ್ಟಿ ರಾಮನಲ್ಲಿ ಐಕ್ಯವಾಯಿತು.

Leave a Reply

Your email address will not be published. Required fields are marked *

error: